ಇಲ್ಲೇ ಇರಬೇಕನಸತೈತೆ

ಇಲ್ಲೇ ಇರಬೇಕನಸತೈತೆ, ಇಲ್ಲೇ ಬಾಳಬೇಕನಸತೈತೆ
ಎಳೇ ಬಿಸಿಲು ಕಾಸಿಗೊಂತ, ಬೆಳೆಯೋ ಪೈರು ನೋಡಿಕೊಂತ

ಹೂವು ಹೂವು ಮೂಸಿಗೊಂತ, ಹಣ್ಣ ರಸವನಿಂಟಿಗೊಂತ
ಮ್ಯಾಲಿನ ಸಿಪ್ಪೆ ಸುಲಕೋಂತ, ಬಾಳೇ ಹಣ್ಣ ನುಂಗಿಕೊಂತ

ಮಲೇ ಮಲೇನೇರಿಕೊಂತ ಹಳ್ಳಕೊಳ್ಳದಾಗ ಹಾವಾಡಿಕೊಂತ
ಹಸರ ಹಾಸಿಗೀ ಒರಗಿಕೊಂತ ಹಳದೀ ಕೆಂಪು ಹೊದ್ದುಕೊಂತ

ಪಕಳೆ ಪಕಳೆ ಬಿಚ್ಚಿಗೊಂತ ಹೂವಿನ ಹುಡಿ ಹಚ್ಚಿಗೊಂತ
ಮೈಯಲಿ ಮನಸು ಹೊಸೆದುಕೊಂತ ಕನಸು ನನಸು ಬೆಸೆದುಕೊಂತ

ಗಾಯ ಮುಟ್ಟಿ ಹಾಯೆನುಕೊಂತ ಕಾಯ ತಟ್ಟಿ ಜುಮ್ಮೆನುಕೊಂತ
ವಾಸನೆಗಳಿಗೆ ಮೊಗೇರಿಸಿಗೊಂತ ವ್ಯಸನಗಳಿಗೆ ತೋಳೇರಿಸಿಗೊಂತ

ಮಾತು ಮಾತಿನ್ಯಾಗ ಕೊಚ್ಚಿಗೊಂತ ಹೆಜ್ಜೆ ಹೆಜ್ಜೆ ಎಡವಿಕೊಂತ
ಕೊಟ್ರೆ ದೇವರನ ಹೊಗಳಿಕೊಂತ ಬಿಟ್ರೆ ಅವನ್ನ ಉಗುಳಿಕೊಂತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ಘಳಿಗೆಗಾಗಿ ಎಷ್ಟೆಲ್ಲಾ….?
Next post ಲಿಂಗಮ್ಮನ ವಚನಗಳು – ೫೬

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys